ರೈತರಿಗೆ ಕುರಿ-ಮೇಕೆ ಸಾಕಾಣಿಕೆಗೆ 1.75 ಲಕ್ಷ ರೂ. ಸಾಲ ನೆರವು ನೀಡಲು ಅರ್ಜಿ ಆಹ್ವಾನ | Amrita Swabhimani Kurigahi Scheme

WhatsApp Group Join Now
Telegram Group Join Now

ಕರ್ನಾಟಕ ರಾಜ್ಯ ಸರಕಾರದ ಕರ್ನಾಟಕ ಕುರಿ ಮತ್ತು ಉಣ್ಣೆ ಅಭಿವೃದ್ಧಿ ನಿಗಮ ನಿಯಮಿತ ಯೋಜನೆಯಡಿ ಅಮೃತ ಸ್ವಾಭಿಮಾನಿ ಕುರಿಗಾಹಿ ಯೋಜನೆಯಡಿಯಲ್ಲಿ ವಿವಿಧ ಜಿಲ್ಲೆಗಳ ಕುರಿ ಸೊಸೈಟಿಯ ನೋಂದಾಯಿತ ಸದಸ್ಯರಿಂದ ಸಹಾಯಧನಕ್ಕೆ ಅರ್ಜಿ ಕರೆಯಲಾಗಿದೆ. ಆಸಕ್ತ ಈ ಯೋಜನೆಯ ಪ್ರಯೋಜನ ಪಡೆಯಲು ಕರ್ನಾಟಕ ಕುರಿ ಮತ್ತು ಉಣ್ಣೆ ಅಭಿವೃದ್ಧಿ ನಿಗಮದ ವಿವಿಧ ಜಿಲ್ಲೆಗಳ ಉಪನಿರ್ದೇಶಕರು ಕೇಂದ್ರ ಕಛೇರಿ ಭೇಟಿ ನೀಡಬಹುದು.

ಕುರಿ ಮತ್ತು ಮೇಕೆ ಸಾಕಾಣಿಕೆದಾರರನ್ನು ಪ್ರೋತ್ಸಾಹಿಸುವ ಮುಖ್ಯ ಉದ್ದೇಶದಿಂದ ರಾಜ್ಯ ಸರಕಾರ ಅಮೃತ ಸ್ವಾಭಿಮಾನಿ ಕುರಿಗಾಹಿ ಯೋಜನೆಯಡಿಯಲ್ಲಿ. ಕುರಿಗಾಹಿಗಳಿಗೆ ಈ ಯೋಜನೆಯಡಿ 20+1 ಕುರಿ/ಮೇಕೆ ಘಟಕಗಳ ಸ್ಥಾಪನೆಗೆ ತಲಾ 1.75 ಲಕ್ಷ ರೂ. ಆರ್ಥಿಕ ನೆರವು ನೀಡುತ್ತದೆ.

Amrita Swabhimani Kurigahi Scheme:

ಏನಿದು ಅಮೃತ ಸ್ವಾಭಿಮಾನಿ ಯೋಜನೆ:
ಕರ್ನಾಟಕ ಕುರಿ ಮತ್ತು ಉಣ್ಣೆ ಅಭಿವೃದ್ಧಿ ನಿಗಮ ನಿಯಮಿತ ಯೋಜನೆಯಡಿ ಬರುವ ಅಮೃತ ಸ್ವಾಭಿಮಾನಿ ಕುರಿಗಾಹಿ ಯೋಜನೆಯಡಿ 20+1 ಕುರಿ/ಮೇಕೆ ಘಟಕಗಳ ಸ್ಥಾಪನೆಗೆ ಫಲಾನುಭವಿಗಳಿಗೆ ತಲಾ 1.75 ಲಕ್ಷ ರೂ. ಪೈಕಿ 50% ರಷ್ಟನ್ನು ರಾಷ್ಟ್ರೀಯ ಸಹಕಾರ ಅಭಿವೃದ್ಧಿ ನಿಗಮದಿಂದ ಸಾಲವಾಗಿ ನೀಡಲಾಗುತ್ತದೆ. ರಾಜ್ಯ ಸರ್ಕಾರದಿಂದ 25% ಅನುದಾನ ಸಿಗಲಿದೆ. ಉಳಿದ 25% ರಷ್ಟು ಹಣವನ್ನು ಫಲಾನುಭವಿಗಳು ಬರಿಸಬೇಕು.

ಪರಿಹಾರ ಧನ:
Amrita Swabhimani Kurigahi Scheme ಕುರಿ ಮತ್ತು ಮೇಕೆಗಳ ಅಕಾಲಿಕ ಸಾವನ್ನಪ್ಪಿದರೆ ‘ಅನುಗ್ರಹ ಯೋಜನೆ’ಯಡಿ ಪ್ರತಿ ಕುರಿಗೆ 5,000 ರೂ. ಪರಿಹಾರ ಸಹ ನೀಡಲಾಗುತ್ತದೆ. ಹಾಗೂ ಕುರಿಗಾರರು ಆಕಸ್ಮಿಕ, ಅಕಾಲಿಕ ಮರಣ ಹೊಂದಿದರೆ ವಿಮಾ ಸೌಲಭ್ಯ ಯೋಜನೆಯಲ್ಲಿ ನಿರಾಶ್ರಿತರ ಕುಟುಂಬದ ಅವಲಂಬಿತರಿಗೆ 5 ಲಕ್ಷ ರೂ. ಪರಿಹಾರ ನೀಡಲಾಗುತ್ತದೆ.

ಹೆಚ್ಚಿನ ಮಾಹಿತಿಗಾಗಿ:
ಜಿಲ್ಲಾ ಕುರಿ ಮತ್ತು ಉಣ್ಣೆ ಅಭಿವೃದ್ಧಿ ನಿಗಮದ ಉಪನಿರ್ದೇಶಕರ ಕಚೇರಿಯಿಂದ ಅರ್ಜಿ ನಮೂನೆಗಳನ್ನು ಪಡೆದು, ಅಗತ್ಯ ದಾಖಲೆಗಳನ್ನು ಭರ್ತಿ ಮಾಡಿ ಇದೇ ಜುಲೈ 18 ರೊಳಗಾಗಿ ಬೆಳಗಾವಿ ಕರ್ನಾಟಕ ಕುರಿ ಮತ್ತು ಉಣ್ಣೆ ಅಭಿವೃದ್ಧಿ ನಿಗಮದ ಉಪನಿರ್ದೇಶಕರ ಕಚೇರಿಯಲ್ಲಿ ಅರ್ಜಿ ಸಲ್ಲಿಸಬಹುದಾಗಿದೆ. ಈ ಕುರಿತ ಮಾಹಿತಿಗಾಗಿ ಕಚೇರಿ ದೂರವಾಣಿ ಸಂಖ್ಯೆ 9449076232, 0831-2431294 ಸಂಪರ್ಕಿಸಲು ಕೋರಲಾಗಿದೆ. ಅಥವಾ ಇ-ಮೇಲ್ ವಿಳಾಸ kswddcbelgaum@gmail.com ಸಂಪರ್ಕಿಸಿ. Amrita Swabhimani Kurigahi Scheme ಜಿಲ್ಲಾವಾರು ಕಚೇರಿ ದೂರವಾಣಿ ಸಂಖ್ಯೆಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಸರ್ಕಾರದಿಂದ ಸಿಗಲಿದೆ 15,000 ರೂ. ಜೊತೆಗೆ 3 ಲಕ್ಷ ರೂ. ಸಾಲ ಸೌಲಭ್ಯ 

Leave a Comment